Rajayoga movie Review ನಟ ಧರ್ಮಣ್ಣನಿಗೆ ತಹಶಿಲ್ದಾರನಾಗುವ ರಾಜಯೋಗ
ತಹಶಿಲ್ದಾರನಾಗಿ ನಟ ಧರ್ಮಣ್ಣನ ಕರಾಮತ್ತು
ಈವರೆಗೆ ಹಲವಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದ ನಟ ಧರ್ಮಣ್ಣ ಕಡೂರು ಮೊದಲಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ ರಾಜಯೋಗ ಈವಾರ ರಾಜ್ಯಾದ್ಯಂತ ಚಿತ್ರ ತೆರೆ ಕಂಡಿದೆ
ಧರ್ಮಣ್ಣನ ಮ್ಯಾನರಿಸಮ್ ಹಾಗೂ ಅಭಿನಯ ಚತುರತೆಗೆ ಪ್ರೇಕ್ಷಕರು ತಲೆ ಬಾಗುತ್ತಾರೆ.
ಧರ್ಮಣ್ಣ ಈಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಮೊದಲಬಾರಿಗೆ ನಾಯಕನಾಗಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಕಡೂರು ಸೇರಿ ನಿರ್ಮಾಣ ಮಾಡಿದ್ದಾರೆ.
ಒಂದು ಹಳ್ಳಿಯಲ್ಲಿ ಅವನೊಬ್ಬ ಸಾಮಾನ್ಯ ಮಾನುಷ್ಯ ಆದರೆ ಅವನ ಕನಸುಗಳು ಮಾತ್ರ ತುಂಬಾ ದೊಡ್ಡದು
ಕೆ.ಎ.ಎಸ್. ಎಕ್ಸಾಂ ಬರೆದು ತಾನು ತನ್ನೂರಿಗೆ ತಹಶೀಲ್ದಾರನಾಗಿ ಬರಬೇಕು ಎನ್ನುವ ಅವನ ಆಸೆ. ಈಡೀ ಊರಿಗೆ ಊರೆ ಅವನನ್ನು ಅಪಹಾಸ್ಯಕ್ಕೆ ಗುರಿ ಮಾಡುತ್ತದೆ.
ಕೊನೆಗೆ ಆತ ತಹಶಿಲ್ದಾರನಾಗಿ ಬರುತ್ತಾನ ಇಲ್ಲವಾ ಎನ್ನುವುದೇ ಕಥೆಯ ಮೂಲ ಆಧಾರ.
ನಾಯಕನ ಪಾತ್ರದಲ್ಲಿ ನಟ ಧರ್ಮಣ್ಣ ಕಾಣಿಸಿಕೊಂಡರೆ, ನಿರೀಕ್ಷಾರಾವ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ.
ಅಕ್ಷಯ್ ರಿಶಭ್ ಅವರ ಸಂಗೀತ, ವಿಷ್ಣುಪ್ರಸಾದ್ ಅವರ ಕ್ಯಾಮೆರಾ, ಬಿ.ಎಸ್. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ.
ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದು ಪರಿಪೂರ್ಣ ಕಾಮಿಡಿ ಚಿತ್ರ ತೆರೆ ಕಂಡಿದೆ. ಒಂದೊಳ್ಳೆಯ ಮನರಂಜನೆಯ ಚಿತ್ರ ಪ್ರೇಕ್ಷಕರು ಸವಿಯಬಹುದು.
Rating – 3.5/5